ಅನಾಥ ಹಸುಗೂಸಿಗೆ ನಾಮಕರಣಮಾಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ

Share

ಹಾವೇರಿ: ನಗರದ ಸ್ವಾಧಾರ ಸ್ವಯಂ ಸೇವಾ ಕೇಂದ್ರದಲ್ಲಿ ಆಶ್ರಯಪಡೆದ ತಾಯಿಯೋರ್ವರಿಗೆ ಜನಿಸಿದ ಮಗುವಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸಮೃದ್ಧಿ ಎಂದು ನಾಮಕರಣ ಮಾಡಿದರು.
ಮಂಗಳವಾರ ಸಂಜೆ ಸ್ವಾಧಾರ ಕೇಂದ್ರದಲ್ಲಿ 22 ದಿನಗಳ ಹೆಣ್ಣು ಮಗುವಿಗೆ ಆಯೋಜಿಸಿದ ನಾಮಕರಣ ಸಮಾರಂಭದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಗಳು ಮಗುವಿಗೆ ನಾಮಕರಣ ಮಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ಪಡಗಣ್ಣನವರ, ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಸಾಹಿತಿ ಸತೀಶ ಕುಲಕರ್ಣಿ, ಸ್ವಾಧಾರ ಕೇಂದ್ರದ ಪರಿಮಳಾ ಜೈನ್ ಭಾಗಿಗಳಾಗಿದ್ದರು.