ಅತ್ಯಾಚಾರ ಪ್ರಕರಣ: ಇಬ್ರಾಹಿಂಸಾಬಗೆ ಎಂಟು ವರ್ಷ ಜೈಲು ಶಿಕ್ಷೆ

Share

ಹಾವೇರಿ: ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಎಂದು ರುಜುವಾತಾದ ಕಾರಣ ಸವಣೂರ ತಾಲೂಕು ಹೊಸಳ್ಳಿ ಗ್ರಾಮದ ಇಬ್ರಾಹಿಂಸಾಬ ತಂದೆ ಹಜರೆಸಾಬ ಕರ್ಜಗಿಗೆ ಹಾವೇರಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಸಿ.ಸದಾನಂದಸ್ವಾಮಿ ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 53 ಸಾವಿರ ರೂ. ದಂಡವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿಯು 2017 ರ ಮಾರ್ಚ್ 29 ರಂದು ಬಂಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹೋತನಹಳ್ಳಿ ಗ್ರಾಮದ ಸಿಂದಗಿ ಮಠದಲ್ಲಿ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಹಿಳೆಯೋರ್ವರನ್ನು ಆರೋಪಿ ಇಬ್ರಾಂಸಾಬ ಬಲವಂತವಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾಗಿ ಪ್ರಕರಣ ದಾಖಲಾಗಿತ್ತು. ಮೇಲಿನ ಆರೋಪ ರುಜುವಾತದ ಕಾರಣ ನ್ಯಾಯಾಧೀಶ ಕೆ.ಸಿ.ಸದಾನಂದಸ್ವಾಮಿ ಮೇಲ್ಕಂಡಂತೆ ತೀರ್ಪು ನೀಡಿದ್ದಾರೆ. ಹಾಗೂ ದಂಡವಾಗಿ ಪಾವತಿಸಿದ ಹಣದಲ್ಲಿ 53 ಸಾವಿರ ರೂ.ಗಳನ್ನು ಪಿರ್ಯಾದಿದಾರರಿ ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸಿದ್ಧಾರೂಢ ಎಂ.ಗೆಜ್ಜಿಹಳ್ಳಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.