ಸುಷ್ಮಾ ಸ್ವರಾಜ್ಗೆ ಭಾವಪೂರ್ಣ ಶ್ರದ್ಧಾಂಜಲಿ
ಸವಣೂರ: ಪಟ್ಟಣದ ಪರೀವಿಕ್ಷಣಾ ಮಂದಿರದಲ್ಲಿ ಬುಧವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ಅಗಲಿದ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಶಂಕರ ಪಾಟೀಲ, ಮೈಲಾರಪ್ಪ ತಳ್ಳಿಹಳ್ಳಿ, ಸಂಗಪ್ಪ ಯರೇಶಿಮಿ, ಮಹೇಶ ಸಾಲಿಮಠ, ಗಿರೀಶ ಮಟಿಗಾರ, ಹನಮಂತಗೌಡ ಮುದಿಗೌಡ್ರ, ಸಮೀತ ಕೆಮ್ಮಣಕೇರಿ ಸೇರಿದಂತೆ ಇತರರು ಇದ್ದರು.