ಹದಗೆಟ್ಟ ಸೇತುವೆ: ಸಂಚಾರ ದುಸ್ತರ

Share

ಹಾವೇರಿ: ರಸ್ತೆ ತುಂಬೆಲ್ಲ ಗುಂಡಿಗಳ ದರ್ಬಾರ್ ಜೊತೆಗೆ ಹದಗೆಟ್ಟ ಸೇತುವೆ, ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ. ಹೌದು ಈ ದೃಶ್ಯ ಕಂಡು ಬಂದಿದ್ದು, ಜಿಲ್ಲೆಯ ಸವಣೂರು ತಾಲೂಕಿನ ಹತ್ತಿಮತ್ತೂರ ಹಾಗೂ ಕಲಕೋಟಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ.
ತಾಲೂಕಿನ ಗ್ರಾಮಗಳಾದ ಕಲಕೋಟಿ, ಹೀರೆಮುಗದೂರ ನದಿನೀರಲಗಿ ಸೇರಿದಂತೆ ಕೆಲ ಗ್ರಾಮದ ಜನರು ತಾಲೂಕು ಕೇಂದ್ರ ಸವಣೂರು ಹಾಗೂ ಜ್ವಲಾಪೂರ ರೈಲ್ವೆ ನಿಲ್ದಾಣ ತಲುಪಲು ಬಳಸುವ ರಸ್ತೆ ಇದಾಗಿದ್ದು, ಸಂಪೂರ್ಣ ಹಾಳಾದ ರಸ್ತೆಯಿಂದ ಸಂಚಾರಕ್ಕೆ ಅಡಚಣೆಯಾಗಿದೆ.
ಮಳೆಯಿಂದಾಗಿ ಜೋರಾಗಿ ಹರಿದ ಹಳ್ಳದ ರಭಸಕ್ಕೆ ಸೇತುವೆ ಸೇರಿದಂತೆ ರಸ್ತೆ ಹಾಳಾಗಿದ್ದು, ವಾಹನದಲ್ಲಿ ಹಿರಿಯರು, ಗರ್ಭಿಣಿಯರು ಆತಂಕದಲ್ಲಿಯೇ ಪ್ರಯಾಣಿಸುವ ಸ್ಥಿತಿಯಿದೆ.

ವರದಿ: ವಿರೇಶ ಹಿತ್ತಲಮನಿ, ಹತ್ತಿಮತ್ತೂರ.