ಪ್ರಾರ್ಥನಾ ಸಭೆ.. 100 ಮಂದಿಗೆ ಕೋವಿಡ್​, ಇಬ್ಬರು ಸಾವು

Share

ಇಡುಕ್ಕಿ (ಕೇರಳ): ಕೋವಿಡ್​ ಪ್ರೋಟೋಕಾಲ್​​ ಉಲ್ಲಂಘಿಸಿ ಪ್ರಾರ್ಥನಾ ಸಭೆ ನಡೆಸಿರುವ ಪರಿಣಾಮ 100ಕ್ಕೂ ಅಧಿಕ ಜನರಿಗೆ ಇದೀಗ ಕೋವಿಡ್​ ಮಹಾಮಾರಿ ತಗುಲಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 80 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೇರಳದ ಇಡುಕ್ಕಿಯಲ್ಲಿ ಚರ್ಚ್​ ಆಫ್​ ಸೌತ್ ಇಂಡಿಯಾ (ಸಿಎಸ್​ಐ)ದ ಪಾದ್ರಿಗಳು ಈ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿದ್ದರು. 480ಕ್ಕೂ ಹೆಚ್ಚು ಪಾದ್ರಿಗಳು ಭಾಗವಹಿಸಿದ್ದರಿಂದ ಇದೀಗ ಪ್ರಕರಣ ಸಹ ದಾಖಲು ಮಾಡಲಾಗಿದೆ. ಇದರ ನೇತೃತ್ವವನ್ನ ಬಿಷಪ್​ ಧರ್ಮರಾಜ್​​ ವಹಿಸಿದ್ದರು ಎಂದು ತಿಳಿದು ಬಂದಿದೆ. ಸಭೆಯಲ್ಲಿ ಭಾಗಿಯಾಗಿದ್ದ ಫ್ರಾ. ಬಿಜುಮನ್​​ (52), ಶೈನ್ ಬಿ. ರಾಜ್​(43) ಕೋವಿಡ್​ಗೆ ಬಲಿಯಾಗಿದ್ದಾರೆ.