ಉಕ್ರೇನ್ನಲ್ಲಿ ಸಿಲುಕಿದ ಕರ್ನಾಟಕದ ವಿದ್ಯಾರ್ಥಿಗಳು: 24/7 ಸಹಾಯವಾಣಿ ಆರಂಭ
ನವದೆಹಲಿ, ಫೆಬ್ರವರಿ 25: ಉಕ್ರೇನ್ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇತರೆ ನೆರೆ ರಾಷ್ಟ್ರಗಳ ಸಹಾಯವನ್ನು ಪಡೆಯುತ್ತಿದೆ. ಹಂಗೇರಿ, ಪೋಲೆಂಡ್, ಸ್ಲೋವಾಕ್ ರಿಪಬ್ಲಿಕ್ ಹಾಗೂ ರೊಮೇನಿಯಾದಲ್ಲಿನ ಗಡಿ ಭಾಗಕ್ಕೆ ಭಾರತ ತನ್ನ ತಂಡವನ್ನು ಈಗಾಗಲೇ ಕಳುಹಿಸಿದೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಗಡಿ ಪ್ರದೇಶಗಳಲ್ಲಿ ಶಿಬಿರವನ್ನು ಸ್ಥಾಪಿಸಲು ಈ ನಾಲ್ಕು ದೇಶಗಳಲ್ಲಿನ ತನ್ನ ಸಹವರ್ತಿಗಳೊಂದಿಗೆ ಮಾತನಾಡಿದ್ದೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವಿಟರ್ನಲ್ಲಿ ಈಗಾಗಲೇ ಮಾಹಿತಿ ನೀಡಿದ್ದಾರೆ.
ಉಕ್ರೇನ್ ದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ಯುದ್ಧಪೀಡಿತ ದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಸೂಕ್ತವಾದ ಆಹಾರ, ಔಷಧ ಮತ್ತು ವಸತಿಗೆ ಅಗತ್ಯವಾಗುವಂತಹ ಜೀವನಾವಶ್ಯಕ ಮತ್ತು ತುರ್ತು ಸಾಮಗ್ರಿಗಳನ್ನು ಒದಗಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ವಕೀಲ ವಿಶಾಲ್ ತಿವಾರಿ ಅವರು ನ್ಯಾಯಾಲಯವನ್ನು ಕೋರಿದ್ದಾರೆ. ಈ ನಡುವೆ ಭಾರತ ಸರ್ಕಾರವು ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರಿಗೆ ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ.
ಎಸ್. ರಾಮ್ ಜೀ
ಮೊಬೈಲ್: +36305199944
ವಾಟ್ಸಾಪ್: +917395983990
ಅಂಕುರ್
ಮೊಬೈಲ್ ಮತ್ತು ವಾಟ್ಸಾಪ್: +36308644597
ಮೋಹಿತ್ ನಾಗ್ಪಾಲ್
ಮೊಬೈಲ್: +36302286566
ವಾಟ್ಸಾಪ್: +918950493059
ಪೋಲೆಂಡ್: ಉಕ್ರೇನ್ನೊಂದಿಗಿನ ಕ್ರಾಕೋವಿಕ್ ಭೂ ಗಡಿಯತ್ತ ಸಾಗುತ್ತಿರುವ ತಂಡ
ಪಂಕಜ್ ಗಾರ್ಗ್
ಮೊಬೈಲ್: +48660460814 / +48606700105
ಸ್ಲೋವಾಕ್ ರಿಪಬ್ಲಿಕ್: ತಂಡವು ಉಕ್ರೇನ್ನೊಂದಿಗೆ ವೈಸ್ ನೆಮೆಕೆ ಭೂ ಗಡಿಯತ್ತ ಸಾಗುತ್ತಿದೆ
ಮನೋಜ್ ಕುಮಾರ್
ಮೊಬೈಲ್: +421908025212
ಐವಾನ್ ಕೊಜಿಂಕಾ
ಮೊಬೈಲ್: +421908458724
ರೊಮೇನಿಯಾ: ಉಕ್ರೇನ್ನೊಂದಿಗಿನ ಸುಸೇವಾ ಭೂ ಗಡಿಗೆ ತಂಡವು ದಾರಿಯಲ್ಲಿದೆ.
ಗೌಶುಲ್ ಅನ್ಸಾರಿ
ಮೊಬೈಲ್: +40731347728
ಉದ್ದೇಶ್ಯ ಪ್ರಿಯದರ್ಶಿ
ಮೊಬೈಲ್: +40724382287
ಆಂಡ್ರಾ ಹರಿಯೊನೊವ್
ಮೊಬೈಲ್: +40763528454
ಮಾರಿಯಸ್ ಸಿಮಾ
ಮೊಬೈಲ್: +40722220823