ಈಜಲು ಹೋಗಿ ಒಂದೇ ದಿನ ಇಬ್ಬರು ಯುವಕರ ಸಾವು

Share

ಹಾವೇರಿ: ತಾಲೂಕಿ ತುಂಗಾ ಕಾಲುವೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ  ಮೃತಪಟ್ಟಿರುವ ಘಟನೆ ಭಾನುವಾರ ಕೆರೆಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇಬ್ಬರು ಸಾವನ್ನಪ್ಪಿರುವ ಯುವಕನರ ಪೈಕಿ
ಕೆರಿಮತ್ತಿಹಳ್ಳಿಯ ರೆಹಮಾನಖಾನ ಹಸನಸಾಬ ನೆಲೋಗಲ್ಲ (31) ಎಂದು ತಿಳಿದು
ಬಂದಿದೆ. ಘಟನೆ ಹಾವೇರಿ ಗ್ರಾಮೀಣಾ ಠಾಣಾ
ವ್ಯಾಪ್ತಿಯಲ್ಲಿ ಈಘಟನೆ ನಡೆದಿದೆ.

ಇನ್ನೊಂದು ಘಟನೆಯಲ್ಲಿ ನಗರದ ಅಂಬೇಡ್ಕರ್ ನಗದ ನಿವಾಸಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಾಗರ ಪ್ರಕಾಶ ಗಾಳೆಮ್ಮನವರ (19) ಎನ್ನುವ ಯುವಕ ನಗರದ ಹೊರವಲಯದಲ್ಲಿರುವ ಹೆಗ್ಗೆರಿ ಕೆರೆಯಲ್ಲಿ ಈಜಲು ಹೋಗಿ
ಮುಳುಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಶಹರ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.