ಮನೆಯಲ್ಲೇ ಸರಳವಾಗಿ ಬಸವ ಜಯಂತಿ ಆಚರಿಸಿ: ಬಸವಶಾಂತಲಿಂಗ ಶ್ರೀ

Share

ಹಾವೇರಿ:  ಬಸವ ಜಯಂತಿಯನ್ನು ಏ.26 ರಂದು ಮನೆಯಲ್ಲೇ ಸರಳವಾಗಿ ಆಚರಿಸುವ ಮೂಲಕ ಕೊರೊನಾ ವೈರಸ್‌ ಸೋಂಕು ತಡೆಗೆ ಎಲ್ಲರೂ ಮುಂದಾಗಬೇಕು ಎಂದು ನಗರದ ಬಸವಕೇಂದ್ರ ಹೊಸಮಠದ ಬಸವಶಾಂತಲಿಂಗ ಶ್ರೀ  ತಿಳಿಸಿದ್ದಾರೆ.

ನಿಮ್ಮ ಕೈಲಾದಷ್ಟು ಬಡವರಿಗೆ, ನಿರ್ಗತಿಕರಿಗೆ, ಮನೆಗೆಲಸದವರಿಗೆ, ಕೂಲಿಕಾರ್ಮಿಕರಿಗೆ ನೆರವು ನೀಡವ ಮೂಲಕ ಬಸವ ಜಯಂತಿಯನ್ನು ಸ್ಮರಣೀಯಗೊಳಿಸಿ ಎಂದು ಅವರು ಮನವಿ ಮಾಡಿದ್ದಾರೆ. 

ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲೇ ಬಸವಣ್ಣನವರ ಪೂಜೆ ನೆರವೇರಿಸಿ ಮತ್ತು ವಚನ ಪಠಣ ಮಾಡಿ.  ಹೊಸಮಠದಲ್ಲಿ ಕೂಡಾ ಅಂದು ಬೆಳಿಗ್ಗೆ ಎಂದಿನಂತೆ ಇಷ್ಟಲಿಂಗ ಪೂಜೆ ಮುಗಿಸಿ, ಶ್ರೀಮಠದ ಮುಂಭಾಗದಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಂಬಲಿ ಹಾಗೂ ಮಜ್ಜಿಗೆ ನೇವೇದ್ಯ ಮಾಡಿ ಬಸವ ಜಯಂತಿ ಸರಳವಾಗಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.