ಊಟ ವಿತರಣೆ

Share

ಹಾವೇರಿ: ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ, ಪೊಲೀಸ್, ಗೃಹ ರಕ್ಷಕದಳದ ಸಿಬ್ಬಂದಿ, ಪೌರ ಕಾರ್ಮಿಕರು ಸೇರಿದಂತೆ ಸುಮಾರು ಸಾವಿರ ಮಂದಿಗೆ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶನಿವಾರ ಊಟ ವಿತರಿಸಿದರು‌.

ಗೋಧಿ ಹುಗ್ಗಿ, ಚಪಾತಿ, ಮಿರ್ಚಿ, ಶಾವಿಗೆ ಪಾಯಸ, ಅನ್ನ ಸಾಂಬಾರ್‌ ಅನ್ನು ಸ್ವತಃ ಕಾಲೇಜು ಸಿಬ್ಬಂದಿಯೇ ಬಡಿಸಿದರು. ಪ್ರಾಂಶಪಾಲ ಪ್ರೊ.ಬಿ.ಟಿ.ಲಮಾಣಿ, ಉಪನ್ಯಾಸಕರಾದ ಡಾ.ಚಂದ್ರಪ್ರಭಾ ಪಟಗಾರ, ಡಾ.ಎಂ.ಎಚ್‌.ಹೆಬ್ಬಾರ್‌, ಮಂದಾಕಿನಿ ಪಾಟೀಲ, ಬಿ.ಎನ್‌.ದೇವೇಂದ್ರ, ಡಾ.ಡಿ.ಟಿ.ಪಾಟೀಲ, ಪ್ರಭಾಕರ ಮಂಟೂರೆ, ಆರ್‌.ಜಿ.ಮಾತನವರ್‌, ಇಮ್ತಿಯಾಜ್‌ ತೆರದಹಳ್ಳಿ ಸೇರಿದಂತೆ ಮುಂತಾದವರು ಇದ್ದರು. ಇವರ ಕಾರ್ಯಕ್ಕೆ ಶಿಗ್ಗಾಂವಿ ಹಾಗೂ ಚಿಕ್ಕಬಾಸೂರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರು ಸಾಥ್ ನೀಡಿದರು.