ಸಿ.ಪಿ. ಯೋಗೇಶ್ವರ್, ಸಿ.ಟಿ. ರವಿ ದಿಢೀರ್ ದೆಹಲಿಗೆ ಪ್ರಯಾಣ
ಬೆಂಗಳೂರು, ಜೂನ 26: ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ದಿಢೀರ್ ದೆಹಲಿಗೆ ತೆರಳಿದ್ದಾರೆ. ನಿನ್ನೆ ರಾತ್ರಿ 8.30ಕ್ಕೆ ವಿಮಾನ ಮೂಲಕ ಯೋಗೇಶ್ವರ್ ದೆಹಲಿಗೆ ಪ್ರಯಾಣಿಸಿದ್ದಾರೆ.
ಇಂದು ಕೇಂದ್ರ ನಾಯಕರ ಭೇಟಿಗೆ ಯೋಗೇಶ್ವರ್ ಕಾಲಾವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. ಇನ್ನು ನಿನ್ನೆ ರಾತ್ರಿಯೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡಾ ದೆಹಲಿಯನ್ನ ತಲುಪಿದ್ದಾರೆ.
ಇತ್ತೀಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿ, ಸಚಿವರು ಶಾಸಕರ ಜೊತೆ ಮಾತುಕತೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಯೋಗೇಶ್ವರ್, ಪರೀಕ್ಷೆ ಬರೆದಿದ್ದೇವೆ ರಿಸಲ್ಟ್ಗೋಸ್ಕರ ಕಾಯುತ್ತಿದ್ದೇವೆ ಅಂತ ಹೇಳಿಕೆ ನೀಡಿದರು. ಇದರ ಬೆನ್ನಲ್ಲೆ ಬಿಜೆಪಿಯ ಇಬ್ಬರೂ ನಾಯಕರ ದೆಹಲಿ ಯಾತ್ರೆ ತೀವ್ರ ಕುತೂಹಲ ಮೂಡಿಸಿದೆ.