ಕಾನೂನು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಗದಗ: ಪ್ರಸಕ್ತ ಸಾಲಿನ ಕಾನೂನು ಪದವಿ ಪಡೆದ ವಿದಾರ್ಥಿಗಳಿಗೆ ವಕೀಲರೊಂದಿಗೆ ವೃತ್ತಿ ಜೀವನ ಪ್ರಾರಂಭಿಸಲು ಮೊದಲ ಹಂತದಲ್ಲಿ ಸಹಾಯಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪ್ರತಿ ವಕೀಲರಿಗೆ ತಿಂಗಳಿಗೆ ೨ ಸಾವಿರ ರೂಗಳಂತೆ ೨೪ ತಿಂಗಳ ಪ್ರೋತ್ಸಾಹಧನ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ರಾಜ್ಯದ ಬಾರ್ ಕೌನ್ಸಿಲ್ ನಲ್ಲಿ ದಿ.೧.೬.೨೦೧೯ ರಿಂದ ೩೧.೫.೨೦೨೦ರ ವರೆಗಿನ ಅವಧಿಯಲ್ಲಿ ನೊಂದಾಯಿಸಿರಬೇಕು. ಮತ್ತು ವಾರ್ಷಿಕ ಆದಾಯ ೪೦.ಸಾವಿರ ರೂ ಮಿರಿರಬಾರದು. ತಾಲೂಕಾ ಬಾರ್ ಕೌನ್ಸಿಲ್ನಲ್ಲಿ ನೊಂದಣಿಯಾದವರು ಆಯಾ ತಾಲೂಕು ಹಿರಿಯ ನ್ಯಾಯಾಧೀಶರ ಮುಖಾಂತರ ಹಾಗೂ ಜಿಲ್ಲಾ ಬಾರ್ ಕೌನ್ಸಿಲ್ನಲ್ಲಿ ನೊಂದಣಿಯಾದವರು ನೇರವಾಗಿ ಪ್ರಧಾನ ಜಿಲ್ಲಾ, ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಅಧ್ಯಕ್ಷರಿಗೆ ದಿ.೨.೧.೨೦೨೧ರೊಳಗಾಗಿ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.