ರೈತ ಬಾಂಧವರ ಗಮನಕ್ಕೆ

Share

ಗದಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹತ್ತಿಯನ್ನು ಭಾರತೀಯ ಹತ್ತಿ ನಿಗಮ (ಸಿ.ಸಿ.ಆಯ್)ದಿಂದ ಖರೀದಿಸಿದ ಹತ್ತಿಯನ್ನು ಸಂಗ್ರಹಿಸಲು ಸ್ಥಳದ ಅಭಾವವಿರುವುದರಿಂದ ೧೫-೧೨-೨೦೨೦ ರಂದು ಒಂದು ದಿನದ ಮಟ್ಟಿಗೆ ಹತ್ತಿ ಖರೀದಿಯನ್ನು ಸ್ಥಗಿತಗೊಳಿಸ ಲಾಗಿರುತ್ತದೆ. ಆದುದರಿಂದ ೧೫-೧೨-೨೦೨೦ರ ಮಂಗಳವಾರದಂದು ರೈತ ಬಾಂಧವರು ಹತ್ತಿಯನ್ನು ಮಾರಾಟಕ್ಕಾಗಿ ಪ್ರಾಂಗಣಕ್ಕೆ ತರಬಾರದೆಂದು ಹಾಗೂ ರೈತ ಬಾಂಧವರು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ ಎಂದು ಗದಗ ಎ.ಪಿ.ಎಂ.ಸಿ.ಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಮತ್ತು ಸಿ.ಸಿ.ಆಯ್. ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.