ಬೀರಲಿಂಗೇಶ್ವರ ದೇವರ ಪ್ರತಿಷ್ಟಾನ ಸಮಾರಂಭ

Share

ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರಗೇಲ್ಲ ಪಟ್ಟಣದಲ್ಲಿ ಹಾಲಮತ ಸಮಾಜದ ಬೀರಲಿಂಗೇಶ್ವರ ದೇವರ ಪ್ರತಿಷ್ಟಾನ ಸಮಾರಂಭವು ಭಾನುವಾರ ಬೆಳ್ಳಿಗ್ಗೆ ಪಟ್ಟಣದ ಕೊಂಡಿಯವರ ಓಣಿಯ ಬಯಲು ಜಾಗೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕನಕಗುರು ಪೀಠದ ಸಿದ್ದರಾಮ ನಂದಪುರಿ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು. ರೋಣ ಮತಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹಜರತ್ ಮಂಜಝರು ಹೇಸೇನ ಶಾವಲಿ ಸಮಾರಂಭದ ಉಪಸ್ಥಿತಿ ವಹಿಸಿ ಮಾತನಾಡಿದರು. ಎಸ್.ಬಿ.ಬೂದಿಹಾಳ,ಮಾಜಿ ಶಾಸಕ ಜಿ.ಎಸ್.ಪಾಟೀಲ್, ಮಲ್ಲಮ್ಮ ಬಿಚ್ಚೂರ, ಜಯಶ್ರೀ ಪಾಟೀಲ್, ರುದ್ರಣ್ಣ ಗುಳಗುಳಿ,ರವಿ ದಂಡಿನ, ಎಚ್ ಎಸ್.ಸೊಂಪೂರ, ಹನಮಂತ ಅಬ್ಬಿಗೇರಿ, ನಿಂಗಪ್ಪ ಹೊನ್ನಾಪೂರ, ಅಕ್ಕಮ್ಮ ಮಣ್ಣೊಡ್ಡರ, ಮಲಕಸಾಬ ರೋಣದ, ವೀರಪ್ಪ ಶಿರಗುಂಪಿ,ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.