2019ರ ಟ್ಯಾಗೋರ್ ಪ್ರಶಸ್ತಿ ಘೋಷಣೆ: ಹಿರಿಯ ವರದಿಗಾರ ನಾರಾಯಣ ಹೆಗಡೆ ಆಯ್ಕೆ

Share

ಹಾವೇರಿ: ಉತ್ತರಕನ್ನಡ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿ ವರ್ಷದಂತೆ ನೀಡುವ ಟ್ಯಾಗೋರ್ ಪ್ರಶಸ್ತಿ ಘೋಷಣೆಯಾಗಿದ್ದು, 2019 ರ ಪ್ರಶಸ್ತಿಗೆ ಜಿಲ್ಲೆಯ ಕನ್ನಡಪ್ರಭದ ಹಿರಿಯ ವರದಿಗಾರ ನಾರಾಯಣ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ.


ಇವರೊಂದಿಗೆ ಹಿರಿಯ ವರದಿಗಾರ ಪಿ ಕೆ ಚಾಪಗಾಂವಕರ ಹಾಗೂ ಹಿರಿಯ ಕ್ಯಾಮರಾಮನ್ ದಿನೇಶ್ ಹಿತ್ತಲದವರ್ ಅವರನ್ನು ಆಯ್ಕೆ ಮಾಡಲಾಗಿದೆ.

ನಾರಾಯಣ ಹೆಗಡೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೈಗಡಿ ಮೂಲದವರಾಗಿದ್ದು, 2004ರಲ್ಲಿ ಕನ್ನಡಪ್ರಭ ಪತ್ರಿಕೆಯ ಬಿಡಿ ವರದಿಗಾರರಾಗಿ ವೃತ್ತಿ ಆರಂಭಿಸಿದರು. ಎರಡು ವರ್ಷ ಸಂಯುಕ್ತ ಕರ್ನಾಟಕ ದಿನಪತ್ರಕೆಯಲ್ಲಿ ಸೇವೆ ಸಲ್ಲಿಸಿದ ಅವರು, 2008ರಿಂದ ಕನ್ನಡಪ್ರಭ ಪತ್ರಿಕೆಯ ಸಹಾಯಕ ವರದಿಗಾರರಾಗಿ ಕೆಲಸ ಮಾಡುತ್ತಾ 2010ರಲ್ಲಿ ಯಾದಗಿರಿ ಜಿಲ್ಲಾ ವರದಿಗಾರರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ 2013ರಿಂದ ಈವರೆಗೆ ಹಾವೇರಿಯಲ್ಲಿ ಕನ್ನಡಪ್ರಭದ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಪ್ರಶಸ್ತಿಗೆ ಭಾಜನಾರ ನಾರಾಯಣ ಹೆಗಡೆ ಅವರಿಗೆ ಜಿಲ್ಲಾ ಕರ್ನಾಟಕ ಪತ್ರಕರ್ತ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರು ಸೇರಿದಂತೆ ಎಲ್ಲಾ ವರದಿಗಾರರು ಅಭಿನಂದನೆ ಸಲ್ಲಿಸಿದ್ದಾರೆ.