ಮಾ.31 ರವರೆಗೆ ಹೊರ ರಾಜ್ಯಗಳಿಗೆ ಕೆಎಸ್ಆರ್ ಟಿಸಿ ಸಂಚಾರ ಸಂಪೂರ್ಣ ರದ್ದು
ಬೆಂಗಳೂರು: ಕೊರೋನಾ (ಕೋವಿಡ್ -19) ವೈರಸ್ ಸೊಂಕು ಹರಡುವ ಭೀತಿ ಹಿನ್ನಲೆಯಲ್ಲಿ ಮಾ.31 ರವರೆಗೆ ಹೊರ ರಾಜ್ಯಗಳಿಗೆ ಕೆಎಸ್ಆರ್ ಟಿಸಿ ಬಸ್ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಎಂಡಿ ಶಿವಯೋಗಿ ಕಳಸದ್ ತಿಳಿಸಿದ್ದಾರೆ.
ತಮಿಳುನಾಡು, ಕೇರಳ, ಆಂದ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಗೆ ಸಂಚರಿಸುವ ಎಲ್ಲ ಬಸ್ ಸಂಚಾರವನ್ನು ಮಾ.31 ರವರೆಗೆ ರದ್ದುಗೊಳಿಸಲಾಗಿದೆ. ಹೊರ ರಾಜ್ಯದ ಬಸ್ ಗಳನ್ನೂ ರಾಜ್ಯಕ್ಕೆ ಕಳಿಸದಂತೆ ಆಯಾ ರಾಜ್ಯದ ಸಾರಿಗೆ ಸಂಸ್ಥೆಗಳಿಗೆ ಮನವಿ ಮಾಡಿದ್ದೇವೆ ಎಂದರು.