ತುರ್ತು ಅವಶ್ಯಕತೆ ಇದ್ದರೆ ಮಾತ್ರ ಪೆಟ್ರೋಲ್: ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಆದೇಶ

Share

ಹಾವೇರಿ: ಕೊರೋನಾ ವೈರಸ್(ಕೋವಿಡ್-19) ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ನಿರತರಾದವರಿಗೆ ಮಾತ್ರ ಪೆಟ್ರೋಲ್ ಒದಗಿಸಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಆದೇಶ ಹೊರಡಿಸಿದ್ದಾರೆ.

ಕರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಪ್ರತ್ಯೇಕತೆ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ರಸ್ತೆಗಳಿಗಿಳಿದು ದ್ವಿಚಕ್ರವಾಹನಗಳಲ್ಲಿ ಓಡಾಡುವುದುನ್ನು ನಿರ್ಭಂಧಿಸಲು ಅಗತ್ಯ ಸೇವೆಯಲ್ಲಿ ನಿರತರಾದ ಅಧಿಕಾರಿ, ನೌಕರರ ದ್ವಿಚಕ್ರ ವಾಹನಗಳಿಗೆ ಹಾಗೂ ತುರ್ತು ಅವಶ್ಯಕತೆ ಇರುವ ನಾಗರೀಕರಿಗೆ ಮಾತ್ರ ಇಂಧನ ಪೂರೈಸುವಂತೆ ಜಿಲ್ಲೆಯ ಎಲ್ಲ ಪೆಟ್ರೋಲ್ ಬಂಕ್ ಮಾಲಿಕರಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.