ಎಂಇಎಸ್ ಹುತಾತ್ಮಕ ಕಾರ್ಯಕ್ರಮ: ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಂದ್ರ ಪಾಟೀಲ ಖಾಸಗಿ ಆಗಮನ ಮರಳಿಸಿದ ಪೊಲೀಸರು

Share

ಬೆಳಗಾವಿ: ಎಂಇಎಸ್ ಹಮ್ಮಿಕೊಂಡ ಹುತಾತ್ಮಕ ದಿನಾಚರಣೆ ಕಾರ್ಯಕ್ರಮದಲ್ಲಿ ಖಾಸಗಿಯಾಗಿ ಆಗಮಿಸಿದ್ದ ಮಹಾರಾಷ್ಟ್ರದ ಆರೋಗ್ಯ ಇಲಾಖೆಯ ಸಚಿವ ರಾಜೇಂದ್ರ ಪಾಟೀಲ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದು ಮಹಾರಾಷ್ಟ್ರಕ್ಕೆ ಮರಳಿ ಕಳುಹಿಸಿದ ಘಟನೆ ಶುಕ್ರವಾರ ಜರುಗಿದೆ.

ಇತ್ತೀಚೆಗೆ ಗಡಿ ವಿಷಯ ಕುರಿತು ಬೆಳಗಾವಿಯಲ್ಲಿ ವಾದ ವಿವಾದ ಮತ್ತೇ ಆರಂಭವಾದ ಹಿನ್ನಲೆಯಲ್ಲಿ ಸಾಮಾಜಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಗಡಿ ವಿಷಯ ಕುರಿತು ಯಾವುದೇ ಪ್ರಚೋದತಾತ್ಮಕ ಭಾಷಣಕ್ಕೆ ಅವಕಾಶ ನೀಡದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಹಮ್ಮಿಕೊಂಡ ಗಡಿ ಹೋರಾಟದ ಸಂದರ್ಭದಲ್ಲಿ ಮಡಿದವರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಖಾಸಗಿಯಾಗಿ ಸಾರಿಗೆ ಬಸ್ಸ್ ಮೂಲಕ ಆಗಮಿಸಿದ್ದ ಸಚಿವ ರಾಜೇಂದ್ರ ಪಾಟೀಲರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮಹಾರಾಷ್ಟ್ರಕ್ಕೆ ಸುರಕ್ಷಿತವಾಗಿ ಮರಳ ಕಳುಹಿಸಿದ್ದಾರೆ.

ನಂತರ ನಡೆದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಎಂಇಎಸ್ ಮುಖಂಡರು ಭಾಗವಹಿಸಿ ಹುತಾತ್ಮರ ಭಾವಚಿತ್ರಗಳಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು.