ಆಪ್ತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸಂಸದೆ ಸ್ಮೃತಿ ಇರಾನಿ

Share

ಅಮೇಠಿ: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಆಪ್ತ ಬೆಂಬಲಿಗ ಸುರೇಂದ್ರ ಸಿಂಗ್ ಪಾರ್ಥಿವ ಶರೀರಕ್ಕೆ ಸಂಸದೆ ಸ್ಮೃತಿ ಇರಾನಿ ಭಾನುವಾರ ಹೆಗಲು ಕೊಟ್ಟಿದ್ದಾರೆ.
ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸ್ಮೃತಿ ಇರಾನಿ ಅವರ ಆಪ್ತ, ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್ ನನ್ನು ಭಾನುವಾರ ನಸುಕಿನ ಜಾವ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.
ಬರೌಲಿಯಾ ಗ್ರಾಮದಲ್ಲಿರುವ ಸಿಂಗ್ ನಿವಾಸಕ್ಕೆ ನುಗ್ಗಿದ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಪರಾರಿಯಾಗಿದ್ದರು. ತಕ್ಷಣ ಅವರನ್ನು ಲಖನೌನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುರೇಂದ್ರ ಸಿಂಗ್ ಸಾವನ್ನಪ್ಪಿದರು.

ವಿಜಯೋತ್ಸವ ಆಚರಿಸಿ ಮನೆಗೆ ಬಂದು ಮಲಗಿದ್ದ ಸಿಂಗ್ ನಸುಕಿನ ಜಾವ ತಾವೇ ಹೋಗಿ ಬಾಗಿಲು ತೆರೆದರು. ಬೈಕ್‌ನಲ್ಲಿ ಬಂದಿದ್ದ ಹಂತಕರು ಮೂರು ಬಾರಿ ಗುಂಡಿ ಹಾರಿಸಿ ಅಲ್ಲಿಂದ ಕಾಲ್ಕಿತ್ತರು ಎಂದು ತಿಳಿದುಬಂದಿದೆ.