ಕನ್ನಡ ಭವನದಲ್ಲಿ ಜರುಗಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಭೆ

Share

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸ್ಥಾಯಿ ಸಮಿತಿ ಸಭೆ ಅಕಾಡೆಮಿಯ ಕನ್ನಡ ಭವನದಲ್ಲಿ ಡಾ.ಅರವಿಂದ್ ಮಾಲಗತ್ತಿ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು. ಸಭೆಯಲ್ಲಿ ಅಕಾಡೆಮಿಯ ಕ್ರಿಯಾ ಯೋಜನೆ ರೂಪಿಸುವ ಬಗ್ಗೆ ಹಾಗೂ ಸಾಹಿತ್ಯ ಪರ್ಭ ಆಯೋಜಿಸುವುದು ಸೇರಿದಂತೆ ಹಲವು ವಿಷಯಗಳ ಚರ್ಚೆ ನಡೆಯಿತು.

ಸಭೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ, ಅಕಾಡೆಮಿಯ ಸ್ಥಾಯಿ ಸಮಿತಿಯ ಸದಸ್ಯರಾದ ಡಾ.ದಂಡಪ್ಪ, ಡಾ ಅಶೋಕ್ ಹಳ್ಳಿ ಯುವರ್, ಸಾವಿತ್ರಿ ಮುಜಮದಾರ, ಆರ್ಥಿಕ ವಿಭಾಗದ ಸಿದ್ದರಾಜು ಸೇರಿದಂತೆ ಅಕಾಡೆಮಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.