ಕೊರೊನಾ ತೊಲಗಿ ಜನರು ನೆಮ್ಮದಿಯಿಂದ ಬಾಳುವಂತಾಗಲಿ: ಸಚಿವ ಬಿಸಿ ಪಾಟೀಲ

Share

ಹಿರೇಕೆರೂರ: ಉತ್ತಮ ಮಳೆಯಿಂದಾಗಿ ಹಿರೇಕೆರೂರು ತಾಲೂಕಿನ ದುರ್ಗಾದೇವಿ ಕೆರೆ ತುಂಬಿ ಹರಿಯುತ್ತಿದ್ದು, ಮಂಗಳವಾರ ಕೃಷಿ ಸಚಿವ ಬಿಸಿ ಪಾಟೀಲ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರ ಯು.ಬಿ. ಬಣಕಾರ್ ಅವರ ಜತೆಗೂಡಿ ಬಾಗಿನ ಅರ್ಪಿಸಿದರು.

ನಂತರ ದುರ್ಗಾ ದೇವಿಯ ದರ್ಶನ ಪಡೆದ ಅವರು, ನಾಡಿನ ಜನತೆಗೆ ಒಳಿತಾಗಲಿ. ಕೊರೊನಾ ತೊಲಗಿ ಜನರು ನೆಮ್ಮದಿಯಿಂದ ಬಾಳುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು‌.