ಸೆ.01ರಂದು ಕಲ್ಯಾಣ ದರ್ಶಣ ಸಮಾರೋಪ ಸಮಾರಂಭ

Share

ಹಾವೇರಿ: ನಗರದ ಬಸವ ಕೇಂದ್ರ ಹೊಸಮಠದ ಶ್ರಾವಣ ಮಾಸದ ವಿಶೇಷ ಕಲ್ಯಾಣ ದರ್ಶಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಸೆ.01 ರ ಭಾನುವಾರ ಬೆಳಿಗ್ಗೆ 10;30ಕ್ಕೆ ಶ್ರೀಮಠದಲ್ಲಿ ಚಿತ್ರದುರ್ಗ ಮುರುಘರಾಜೇಂದ್ರ ಮಠದ ಶಿವಮೂರ್ತಿ ಮುರುಘಾಶರಣರ ಅಧ್ಯಕ್ಷತೆಯಲ್ಲಿ ಜರುಗಲಿದೆ.

ರಾಣೇಬೆನ್ನೂರ ವಿರಕ್ತ ಮಠದ ಗುರುಬಸವ ಶ್ರೀ ಸಮ್ಮುಖದಲ್ಲಿ ಜರಗುವ ಸಮಾರಂಭದ ನೇತೃತ್ವವನ್ನು ಬಸವ ಕೇಂದ್ರ ಹೊಸಮಠದ ಬಸಶಾಂತಲಿಂಗ ಶ್ರೀ ವಹಿಸಲಿದ್ದು, ಅತಿಥಿಗಳಾಗಿ ಹಾವೇರಿ ಶಾಸಕ ನೆಹರು ಓಲೇಕಾರ, ಕಾಗಿನೆಲೆ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊಸಪೇಟೆ, ಬೆಂಗಳೂರು ಆಡಳಿತ ಸುಧಾರಣೆಯ ಸಹಾಯಕ ಆಯುಕ್ತ ಡಾ//ಎ.ಚನ್ನಪ್ಪ ಹಾಗೂ ಹಾವೇರಿ ಕ.ರ.ಸಾ.ನೌ ಸಂಘದ ಅಧ್ಯಕ್ಷ ಅಮೃತಗೌಡ ಪಾಟೀಲ ಆಗಮಿಸಲಿದ್ದಾರೆ ಎಂದು ಶ್ರೀ ಮಠ ಪ್ರಕಟಣೆಯಲ್ಲಿ ತಿಳಿಸಿದೆ.