ಮನುಷ್ಯನ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ಶಕ್ತಿ ಗುರುವಿಗಿದೆ :ರೇವಣಸಿದ್ದೇಶ್ವರ ಶ್ರೀ

Share

ಹಾವೇರಿ: ಮನುಷ್ಯನ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ಶಕ್ತಿ ಗುರುವಿಗಿದ್ದು,ಅಂತಹ ನಿಜ ಗುರುವನ್ನು ಪಡೆದ ನೆಗಳೂರಿನ ಸದ್ಭಕ್ತರು ಧನ್ಯರು ಎಂದು ಬಂಕಾಪುರ ಅರಳೆಲೆ ಹಿರೇಮಠದ ರೇವಣ ಸಿದ್ದೇಶ್ವರ ಶಿವಾಚಾರ್ಯ ಶ್ರೀ ಹೇಳಿದರು.

ತಾಲೂಕಿನ ನೆಗಳೂರ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ಗುರುಶಾಂತೇಶ್ವರ ಶಿವಾಚಾರ್ಯರ 7 ನೇ ವರ್ಷದ ಶಿವಯೋಗ ಮೌನ ತಪೋನುಷ್ಠಾನ ಮಂಗಲ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಹಾವೇರಿ ಹರಸೂರು ಬಣ್ಣದ ಮಠದ ಚನ್ನಮಲ್ಲಿಕಾರ್ಜುನ ಶ್ರೀ ಮಾತನಾಡಿ, ನೆಗಳೂರ ಶ್ರೀಗಳ ಕ್ರೀಯಾಶೀಲತೆ ಉತ್ತಮ ಸಂಸ್ಕಾರ ಪಸರಿಸುವಲ್ಲಿ ಶ್ರೀಗಳ ಪಾತ್ರ ಮಹತ್ವವಾಗಿದೆ. ಶ್ರೀಗಳು ಕಿರಿಯ ವಯಸ್ಸಿನಲ್ಲಿ ಮಠದ ಅಭಿವೃದ್ಧಿಯೊಂದಿಗೆ ಸದ್ಭಕ್ತರ ಅಂತರಂಗವನ್ನು ಅರಿತು, ಅವರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನ್ಮುಖವಾಗಿರುವುದು ಶ್ಲಾಘನೀಯ ಎಂದರು.

ಗುರುಶಾಂತೇಶ್ವರ ಶಿವಾಚಾರ್ಯರು ಮಾತನಾಡಿ 48 ದಿನಗಳ ಕಾಲ ಕೈಗೊಂಡ ಅನುಷ್ಠಾನ ಬಹಳ ಸಂತೋಷ ವನ್ನುಂಟು ಮಾಡಿದೆ. ಮಾತಿಗಿಂತ ಮೌನಕ್ಕೆ ಬಹಳ ಶಕ್ತಿಯಿದೆ ಅದಕ್ಕಾಗಿ ಮಾತು ಬೆಳ್ಳಿ ಮೌನ ಬಂಗಾರ ಎಂದು ಪೂರ್ವಜರ ನಾಣ್ಣುಡಿ ಸಾರ್ವಕಾಲಿಕ ಮೌನಕ್ಕೆ ಅಪಾರ ಶಕ್ತಿಯಿದೆ ಜೀವನದಲ್ಲಿ ನಗು ಮತ್ತು ಮೌನದಿಂದ ಏನಾದರು ಸಾಧನೆ ಮಾಡಬಹುದು ಅದಕ್ಕಾಗಿ ಮನುಷ್ಯನಾದವನು ಧರ್ಮ ಮಾರ್ಗದಲ್ಲಿ ನಡೆದು ಎಂತಹ ಸಂದರ್ಭದಲ್ಲಿ ಧೃತಿಗೇಡದೆ ಮೌನ ಹಾಗು ನಗುವಿನಿದ್ದರೆ ಎಲ್ಲವೂ ಸಾಧ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ಗ್ರಾ.ಪಂ ಅಧ್ಯಕ್ಷೆ ಜಯಮ್ಮ ಬನ್ನಿಮಟ್ಟಿ, ಉಪಾಧ್ಯಕ್ಷ ಹುಚ್ಚುಸಾಬ್ ನದಾಫ, ಕೆ.ಎಂ.ಮೈದೂರ, ಶಿವಕುಮಾರ ಮಾಹೂರ, ಚನ್ನಬಸಪ್ಪ ಬನ್ನಿಮಟ್ಟಿ, ಕುರುವತ್ತೆಪ್ಪ ಹೊಸಮನಿ, ಮಂಜಪ್ಪ ಮರಿಯಾಣಿ, ಗಂಗಪ್ಪ ದಂಡಿಗನಹಳ್ಳಿ, ಕೊಟ್ರೇಶ ಮಠದ, ನಾಗಪ್ಪ ಕಟ್ಟೆಣ್ಣನವರ, ಕುಮಾರ ಕಟ್ಟೆಪ್ಪನವರ, ಕುಮಾರ ಹುಲೇಪ್ಪನವರ, ಅಮರ ಗಂಗನಗೌಡ್ರ, ಈಶ್ವರ ಶಿಡೇನೂರ, ರವಿ ಗುಂಜಳ, ಮಾಲತೇಶ ಮೈಲಾರ, ಅರುಣ ರಿತ್ತಿಮರಿಯಣ್ಣನವರ ಸೇರಿದಂತೆ ಬೆಳವಿಗಿ, ಹಿರೇಮೂಗದೂರ, ಗುತ್ತಲ, ದೇವಿಹೊಸೂರ, ಬೆಳಹಾರ, ಹೊಸ ಹೊನ್ನತ್ತಿ ಗ್ರಾಮಗಳಿಂದ ಸದ್ಬಕ್ತರು ಪಾಲ್ಗೊಂಡಿದ್ದರು. ಗುರುಶಾಂತ ಸ್ವಾಮಿ ಹಿರೇಮಠ ಸ್ವಾಗತಿಸಿದರು. ಗದಿಗೆಯ್ಯಸ್ವಾಮಿ ಹಿರೇಮಠ ಪ್ರಾಸ್ತವಿಕ ನುಡಿದರು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.