ನೀರಿನ ರಭಸಕ್ಕೆ ಕೊಚ್ಚಿಹೋದ ರೈತ

Share

ಹಾವೇರಿ: ಸತತ ಸುರಿಯುತ್ತಿರುವ ಮಳೆಗೆ ನೀರಿನಲ್ಲಿ ರೈತನೊರ್ವ ಕೊಚ್ಚಿಹೋದ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಶ್ರೀಗೇರಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ.

ಮೂಲತಃ ಶ್ರೀಂಗೇರಿ ಗ್ರಾಮದ ನಿವಾಸಿ ಶಿವಪ್ಪ ಸೊಟ್ಟಕ್ಕನವರ ಕೊಚ್ಚಿಹೋದ ರೈತ. ತಾಲೂಕಿನ ಮಳಗಿ ಡ್ಯಾಂನ ಚಾನಲ್ ನಲ್ಲಿ ಕೈ, ಕಾಲು ತೊಳೆಯುವ ವೇಳೆ ನೀರಿನ ರಭಸಕ್ಕೆ ಶಿವಪ್ಪ ಕೊಚ್ಚಿಹೋಗಿದ್ದಾನೆ. ಈಜು ತಜ್ಞರಿಂದ ವ್ಯಕ್ತಿಗಾಗಿ ಶೋಧಕಾರ್ಯ ಆರಂಭವಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ.