ಸಾಧನೆ ಸಾಧಕನ ಸ್ವತ್ತು: ನಿರಂಜನ ಶ್ರೀ

Share

ಸವಣೂರ: ಸಾಧಿಸುವ ಛಲವೊಂದಿದ್ದರೆ ಸಾಕು, ಎಂತಹ ಸಾಗರವಾದರೂ ಸರಿ ಈಜಿ ದಡ ಸೇರಬಹುದು ಎಂಬುವುದಕ್ಕೆ ಉತ್ತಮ ಉದಾಹರಣೆ ಸಾಧಕ ಡಾ.ವಿರೇಶ ಹಿತ್ತಲಮನಿ ಆಗಿದ್ದಾರೆ ಎಂದು ನಿರಂಜನ ಶ್ರೀ ಹೇಳಿದರು.

ತಾಲೂಕಿನ ಹತ್ತಿಮತ್ತೂರು ವಿರಕ್ತ ಮಠದಲ್ಲಿ ಇತ್ತೀಚೆಗೆ ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿಯಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪ್ರಶಸ್ತಿ ಹಾಗೂ ವಿವಿಧ ಸಾಮಾಜಿಕ ಪ್ರಶಸ್ತಿಗಳಿಗೆ ಭಾಜನರಾದ ಡಾ.ವಿರೇಶ ಹಿತ್ತಲಮನಿಯವರಿಗೆ ಅವರ ಗದಗ ಸ್ನೇಹ ಬಳಗದಿಂದ ನಡೆದ ಗೌರವ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪದವೀಧರ ಒಕ್ಕೂಟದ ರಾಜ್ಯಾಧ್ಯಕ್ಷ ಎಮ್.ಎಸ್. ನಾಗರಕಟ್ಟಿ ಮಾತನಾಡಿದರು.

ನಿರುದ್ಯೋಗದ ಸಮಸ್ಯೆ ಯ ನಿರ್ಮೂಲನೆಗಾಗಿ ಪದವಿಧರರಿಂದ ಪದವಿದರರಿಗೋಸ್ಕರವಾಗಿರುವ ಈ ಹೋರಾಟದ ಒಕ್ಕೂಟದ ಹಾವೇರಿ ಜಿಲ್ಲಾ ಪದವೀಧರ ಒಕ್ಕೂಟದ ನೂತನ ಜಿಲ್ಲಾಧ್ಯಕ್ಷರಾಗಿ ಡಾ.ವಿರೇಶ.ಹಿತ್ತಲಮನಿ ಪದಗ್ರಹಣ ಸ್ವೀಕರಿಸಿದರು.

ರಾಜ್ಯ ಪದವಿಧರ ಒಕ್ಕೂಟದ ವಿವಿಧ ಪದಾಧಿಕಾರಿಗಳಾದ ಕಿರಣಕುಮಾರ ಮುಂಡರಗಿ, ಮಹಾಂತೇಶ ಚೆನ್ನದಾಸರ, ಗುರು ಪೂಜಾರ, ಜಾಫರ್ ಅಹಮದ್, ಶಮೀರ್ ಪ್ಯಾಟಿ, ಶಹಭಾಜಿ ಕುಲಕರ್ಣಿ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತಿತರಿದ್ದರು. ಚಂದ್ರಶೇಖರ ಕುಳೇನೂರು ವಂದಿಸಿದರು.