ಕೆಐಎಡಿಬಿ ಸೈಟ್ ಹಂಚಿಕೆಯಲ್ಲಿ ಅನ್ಯಾಯ : ACBಯಿಂದ ದಾಖಲೆ ಪರಿಶೀಲನೆ

Share

ಧಾರವಾಡ, ಜೂನ 30: ಕೆಐಎಡಿಬಿ ಸೈಟ್ ಹಂಚಿಕೆಯಲ್ಲಿ ಅನ್ಯಾಯ ಮಾಡಿರುವ ದೂರು ಕೇಳಿಬಂದ ಹಿನ್ನೆಲೆ ಕೆಐಎಡಿಬಿ ಕಚೇರಿಯಲ್ಲಿ ಎಸಿಬಿ‌ ಅಧಿಕಾರಿಗಳು ನಿನ್ನೆಯಿಂದ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಸೈಟ್ ಹಂಚಿಕೆಯಾದವರನ್ನು ಬಿಟ್ಟು ಬೇರೆಯವರೆಗೆ ನೀಡಿರುವ ಆರೋಪ ಕೇಳಿಬಂದಿದೆ.  ಈ ಹಿನ್ನೆಲೆಯಲ್ಲಿ ವಾದಿರಾಜ್ ಬಳ್ಳಾರಿ, ಶಿವಾಜಿ ಡೆಂಬ್ರೆ ಎನ್ನುವವರು ಎಸಿಬಿಗೆ ದೂರು ನೀಡಿದ್ದರು. ಎಸಿಬಿ ಅಧಿಕಾರಿಗಳಾದ ಡಿವೈಎಸ್ಪಿ ಪಿ. ವೇಣುಗೋಪಾಲ ನೇತೃತ್ವದಲ್ಲಿ ನವಲೂರು ಬಳಿಯಿರುವ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಧಾರವಾಡದ ಇಟ್ಟಿಗಟ್ಟಿ ಹಾಗೂ ಗಾಮನಗಟ್ಟಿ ಗ್ರಾಮದ ಜಮೀನುಗಳ ವಿಚಾರವಾಗಿ ಎಸಿಬಿ‌ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅವ್ಯವಹಾರ ನಡೆಯುತ್ತಿರು ಕುರಿತು ಎಸಿಬಿಗೆ ಎರಡು ಪ್ರತ್ಯೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಎಸಿಬಿ ಎಸ್​​ಪಿ ಎಸ್. ನ್ಯಾಮಗೌಡ ನೇತೃತ್ವದ ಅಧಿಕಾರಿಗಳ ತಂಡ ನಿನ್ನೆಯಿಂದ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದೆ.

ಭೂ ಸ್ವಾಧೀನಾಧಿಕಾರಿಗಳ ಕಚೇರಿಯಿಂದ ಭೂಸ್ವಾಧೀನಕ್ಕೊಳಪಟ್ಟ ನಿಜವಾದ ಫಲಾನುಭವಿಗಳಿಗೆ ಪರಿಹಾರ ದೊರಕುತ್ತಿಲ್ಲ. ಕಚೇರಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ವಾದಿರಾಜ ಮನ್ನಾರಿ ಹಾಗೂ ಶಿವಾಜಿ ಡೇಂಬ್ರೆ ಎಂಬುವವರು ಪ್ರತ್ಯೇಕವಾಗಿ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.