ವೀರೇಶ ಹಿತ್ತಲಮನಿಗೆ ಗೌರವ ಡಾಕ್ಟರೇಟ್

Share

ಹಾವೇರಿ: ಜಿಲ್ಲೆಯ ಸವಣೂರು ತಾಲೂಕು ಹತ್ತಿಮತ್ತೂರ ಗ್ರಾಮದ ನಿವಾಸಿ ಉಪನ್ಯಾಸಕ, ಸಾಹಿತಿ ವೀರೇಶ ಹಿತ್ತಲಮನಿ ಅವರ ಸಾಹಿತ್ಯ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಕರ್ನಾಟಕ ವಿಭಾಗದಲ್ಲಿ ಇಂಟರ್ ನ್ಯಾಶನಲ್ ಗ್ಲೋಬಲ್ ಪೀಸ್‌ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ.

ಸೆ. 29 ರ ಭಾನುವಾರ ಹೊಸೂರ ( ಸೌತ್ ಇಂಡಿಯಾ) ನಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಕಾರ್ಯಕ್ರಮ ಜರುಗಲಿದೆ. ವೀರೇಶ ಹಿತ್ತಲಮನಿ ಅವರನ್ನು ಹಳ್ಳಿವಾಣಿ ಸುದ್ದಿ ಬಳಗ ಅಭಿನಂದಿಸುತ್ತದೆ.