ವಕ್ಫ ಮಂಡಳಿಯಿಂದ ಗೌರವ ಧನ ಬಿಡುಗಡೆ

Share

ಹಾವೇರಿ: ಬೆಂಗಳೂರಿನ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಮಸಜೀದಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ ಇಮಾಮ ಮತ್ತು ಮವಜ್ಜನರು ಗೌರವ ಬಿಡಗಡೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಪಾಸಬುಕ್ ಪ್ರತಿ, ಆಧಾರಕಾರ್ಡ ಪ್ರತಿ ಮತ್ತು ಮಸ್ಜಿದ ಕಮೀಟಿಯ ಅಧ್ಯಕ್ಷರು/ಕಾರ್ಯದರ್ಶಿಯವರಿಂದ ಸೇವೆ ಸಲ್ಲಿಸುತ್ತಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಲು ತಿಳಿಸಿದೆ. ಇಲ್ಲವಾದಲ್ಲಿ ಗೌರವಧನ ಬಿಡುಗಡೆ ಮಾಡಲು ವಿಳಂಬವಾಗುತ್ತದೆ.

ಎಲ್ಲ ಮಸಜೀದಗಳ ಪೇಶ ಇಮಾಮ ಮತ್ತು ಮವಜ್ಜನರು ಹಾಗೂ ಮಸ್ಜಿದ್ ಕಮೀಟಿಯವರು ಮೇಲಿನ ದಾಖಲಾತಿಗಳನ್ನು ಜಿಲ್ಲಾ ವಕ್ಫ್ ಕಾರ್ಯಾಲಯ ಜಿಲ್ಲಾಡಳಿತ ಭವನ, ಎ ಬ್ಲಾಕ್,, ಮೊದಲನೆ ಮಹಡಿ ದೇವಗಿರಿ ಇಲ್ಲಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.