ಯಾವ ಖಾತೆ ನೀಡಿದರೂ ನಿಭಾಯಿಸಲು ಸಿದ್ದ: ಬಿಸಿ ಪಾಟೀಲ್

Share

ಹಾವೇರ: ರಾಜ್ಯ ಸಚಿವ ಸಂಪುಟ ಪುನರ್ ರಚನೆಯಲ್ಲಿ ಮಾನದಂಡದ ಅಳತೆಯಲ್ಲಿ ಯಾರಿಗೆ ಯಾವ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠು ತೀರ್ಮಾನ ತೆಗೆದುಕೊಳ್ಳಲಿದ್ದು, ನನಗೆ ಯಾವ ಖಾತೆಯನ್ನು ನೀಡಿದರೂ ಪರವಾಗಿಲ್ಲ. ಕೊಟ್ಟ ಸಚಿವ ಸ್ಥಾನವನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ ಎಂದು ಹಿರೇಕೆರೂರ ಶಾಸಕ ಬಿಸಿ ಪಾಟೀಲ ಅವರು ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಎಚ್.ವಿಶ್ವನಾಥ ಸಚಿವ ಸ್ಥಾನ ಕೊಡಬೇಕು ಎಂದು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದಕ್ಕೆ ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. 17 ಜನರಿಗೆ ಸಚಿವ ಸ್ಥಾನ ನೀಡುವುದರಲ್ಲಿ ಸೋತವರು, ಗೆದ್ದವರು ಎಂಬ ವಿಷಯ ಬರುವುದಿಲ್ಲ. ಯಾವಾಗ ನಾವು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆವೆಯೋ ಅಂದಿನಿಂದ ನಾವು ಬಿಜೆಪಿ ಪಕ್ಷದವರು. ನಮಗೆ ಯಾವುದೇ ಸಚಿವ ಸ್ಥಾನ ಕೊಟ್ಟರು ನಿಭಾಯಿಸಲು ಸಿದ್ದ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ನಮ್ಮ 17 ಜನರ ಬಗ್ಗೆ ವಿನಾ ಕಾರಣ ಆರೋಪ ಮಾಡುತ್ತಿದ್ದು, ಅದರಿಂದ ನಮಗೆ ಒಳ್ಳೆಯದಾಗಿದೆ. ಉಪ ಚುನಾವಣೆಯಲ್ಲಿ ನನ್ನ ಕ್ಷೇತ್ರಕ್ಕೆ ಬಂದು ನನ್ನ ಬಗ್ಗೆ ಸುಳ್ಳು ಆರೋಪ ಮಾಡಿದ ಪರಿಣಾಮ ಜನರು ನನಗೆ ಹೆಚ್ಚು ಮತಗಳನ್ನು ನೀಡಿ ಗೆಲುವು ನೀಡಿದರು ಎಂದು ಹೇಳಿದರು.