ಆರೋಗ್ಯವಂತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ: ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ

Share

ಹಾವೇರಿ: ರಕ್ತದಾನಕ್ಕೆ ಜೀವದಾನ ಮಾಡುವ ಶಕ್ತಿ ಇದ್ದು, ಆರೋಗ್ಯವಂತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಎಸ್.ರಾಘವೇಂದ್ರಸ್ವಾಮಿ ಹೇಳಿದರು
ಮಂಗಳವಾರ ಜಿಲ್ಲಾ ಆರೋಗ್ಯ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ಪ್ರಯೋಗಶಾಲೆ ಟೆಕ್ನಾಲಾಜಿಸ್ಟರ ಸಂಘ, ಜಿಲ್ಲಾ ಘಟಕ ಹಾವೇರಿ ಇವರ ನೇತ್ರತ್ವದಲ್ಲಿ ಭಾರತಿಯ ವೈದ್ಯಕೀಯ ಸಂಘ, ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘ , ಲಯನ್ಸ ಕ್ಲಬ್, ರೋಟರಿ ರೆಡ್ ಕ್ರಾಸ್, ಜಿ.ಸಿ.ಐ.ಅಪಿಕ ನೌಕರರು, ಶುಶ್ರೂಕರು ಪಾರ್ಮಾಸಿಸ್ಟ ನೇತ್ರಾಧಿಕಾರಿಗಳು ರೇಡಿಯೋಗ್ರಾಫರ್ಸ , ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು, ಆಪ್ತ ಸಮಾಲೋಚಕರ ವಾಹನ ಚಾಲಕರ, ಡಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲ್ಲಿ ಆಯೋಜಿಸಲಾದ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಉಧ್ಘಾಟಿಸಿ ಅವರು ಮಾತನಾಡಿದರು.
ಎಬಿ ನೆಗಟಿವ್ ಮತ್ತು ಓ ಪಾಸಿಟಿವ್ ರಕ್ತದ ಗುಂಪು ಅತ್ಯಾವಶ್ಯಕ ಗುಂಪುಗಳಾಗಿವೆ. ಈ ರಕ್ತದ ಗುಂಪುಗಳನ್ನು ಹೊಂದಿದ ದಾನಿಗಳ ಮೊಬೈಲ್ ನಂಬರ್ ಪಡೆದು ಅಗತ್ಯ ಸಂದ ರ್ಭಗಳಲ್ಲಿ ರಕ್ತದಾನ ಮಾಡಿಸಿಕೊಳ್ಳಬೇಕು. 35 ದಿನಗಳವರೆಗೂ ಶೇಖರಿಸಿಟ್ಟ ರಕ್ತವು ಅನು ಪಯುಕ್ತವಾಗುವ ಸಾಧ್ಯತೆಯಿದೆ. ಶೇಖರಿಸಿದ ರಕ್ತವನ್ನು ಅವಶ್ಯಕ ಸಮಯದಲ್ಲಿ ರೋಗಿ ಗಳಿಗೆ ನೀಡಬೇಕು. ಜನ್ಮನೀಡುವವಳು ಜನನಿಯಾದಾರೆ, ಪುನರಜನ್ಮ ನೀಡುವವರು ರಕ್ತ ದಾನಿಗಳಾಗುತ್ತಾರೆ ಎಂದು ಹೇಳಿದರು.
ರಕ್ತನಿಧಿ ಕೇಂದ್ರದ ಜಿಲ್ಲಾ ವೈಧಾಧಿಕಾರಿ ಬಸವರಾಜ ತಳವಾರ ಮಾತನಾಡಿ, ರಕ್ತದಾನ ಮಾಡುವುದರಿಂದ ಸಮಸ್ಯೆಗಳು ಎದುರಾಗಬಹುದೆಂಬ ಮೂಢನಂಬಿಕೆಗಳಿವೆ. ಇಂತಹ ತಪ್ಪು ಕಲ್ಪನೆಯಿಂದ ಹೊರಬಂದು ರಕ್ತದಾನ ಮಾಡಬೇಕು. ಏಪ್ರಿಲ್, ಮೇ, ಜೂನ್ ತಿಂಗ ಳುಗಳಲ್ಲಿ ರಕ್ತದಾನಿಗಳ ಸಂಖ್ಯೆ ಕಡಿಮೆ, ಉಳಿದ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕ್ಯಾಂಪ್ ಮಾಡಿ ರಕ್ತ ಸಂಗ್ರಹಿಸಿ ಕೊರತೆ ನಿಗಿಸಬಹುದು. ತುರ್ತು ಪರಿಸ್ಥಿತಿಯಲ್ಲಿ ಧಾರವಾ ಡ-ಹುಬ್ಬಳ್ಳಿ, ದಾವಣಗೆರೆ-ಶಿವಮೊಗ್ಗ ನಗರಗಳಿಗೆ ಹೋಗುವುದು ತಪ್ಪುವುದು ಎಂದರು.
ಬಸವರಾಜ ಕಮತದ ಪ್ರಾಸ್ತಾವಿಕವಾಗಿ ಮಾತಾನಾಡಿ, ರಕ್ತದಾನಿಗಳ ಸಂಖ್ಯೆ ಕಡಿಮೆ ಯಾಗಿದೆ, ರಕ್ತ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕಾಗಿ ರಕ್ತದಾನ ಮಾಡಿ “ಗೀವಬ್ಲಡ್ ಗೊ ಗ್ರಿನ್ ಸೆವ್ ಬ್ಲೂ” ಎಂಬ ಧ್ಯೆಯ ವಾಕ್ಯದೊಂದಿಗೆ ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ವನಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾರತಿಯ ವೈದ್ಯಕೀಯ ಸಂಘದ ಅಧ್ಯಕ್ಷ ಮೃತ್ಯುಂಜಯ ತಿರುಕಾಣಿ ಅವರು ಮಾತಾನಾಡಿ, ರಕ್ತದ ಕೊರತೆಯನ್ನು ನಿಗಿಸಲು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು. ಜೊತೆಗೆ ರಕ್ತ ಶೇಖರಣೆಗೆ ಕ್ಯಾಂಪಗಳು ಅವಶ್ಯಕವಾಗಿವೆ ಎಂದರು
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ನೀಲೇಶ ಎಂ.ಎನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ, ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಡಾ.ಸುಹೀಲ್ ಹರವಿ, ಮಲ್ಲಿಕಾರ್ಜುನ ಬಿ.ಶಾಂತಗಿರಿ, ಸಿದ್ದಪ್ಪ ಕುಗೂರ, ರವಿ ಬಣಕಾರ ಇತರರು ಉಪಸ್ಥಿತರಿದ್ದರು.