ಕೈಯಲ್ಲಿ ‘ಚಾಕು’ ಹಿಡಿದು ಕುಡುಕನಿಂದ ಗೂಂಡಾವರ್ತನೆ..

Share

ಹುಬ್ಬಳ್ಳಿ, ಜುಲೈ 14 : ಕುಡುಕನ ಅಸಭ್ಯ ವರ್ತನೆಯಿಂದ ಬೇಸತ್ತ ಕುಟುಂಬವೊಂದು ಪೊಲೀಸ್ ಮೊರೆ ಹೋದ ಘಟನೆ ಹುಬ್ಬಳ್ಳಿಯ ನೇಕಾರ ನಗರದ ತಿಮ್ಮಸಾಗರ ರಸ್ತೆಯಲ್ಲಿ ನಡೆದಿದೆ.

ಮೂಲತಃ ನವಲಗುಂದದ ಪಾಪು ಅಂಬಿಗೇರ ಅವರ ಕುಟುಂಬ ಈಗ ಹುಬ್ಬಳ್ಳಿಯ ನೇಕಾರ ನಗರದಲ್ಲಿ ವಾಸಿಸುತ್ತಿದೆ. ಆದರೆ, ಕುಡುಕನ ಗೂಂಡಾವರ್ತನೆಯಿಂದ ಬೇಸತ್ತಿದೆ. ಇವರ ಮನೆ ಪಕ್ಕದಲ್ಲಿರುವ ರವಿ ಅಲಿಯಾಸ್ ಲಾಲ್ ರವಿ ಎಂಬ ವ್ಯಕ್ತಿ ದಿನಂಪ್ರತಿ ಕುಡಿದು ಬಟ್ಟೆ ಬಿಚ್ಚಿಕೊಂಡು ಮನೆ ಮುಂದೆ ನಿಲ್ಲುವುದು. ಅಲ್ಲದೇ ಪಕ್ಕದ ಮನೆಯವರ ಕಿಟಕಿ ಬಳಿ ಮೂತ್ರ ವಿಸರ್ಜನೆ, ಮಹಿಳೆಯರ ಜತೆ  ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಿಳೆಯೊಬ್ಬರ ನಂಬರ್ ಕೇಳಿ ಅವರಿಗೆ ಕೆಟ್ಟ ಸಂದೇಶ ಕಳುಸಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಬೇಸತ್ತ ಪಾಪು ಅಂಬಿಗೇರ ಕುಟುಂಬಸ್ಥರು ಕೇಳಲು ಹೋದಾಗ ಇವರ ಮೇಲೆ ರವಿ ಅಲಿಯಾಸ್ ಲಾಲ್ ರವಿ ಚಾಕು ಇರಿಯಲು ಮುಂದಾಗಿದ್ದಾನೆ.‌ ಇದೀಗ ಈ ಕುಟುಂಬ ಹಳೇ ಹುಬ್ಬಳ್ಳಿ ಪೊಲೀಸರ ಮೊರೆ ಹೋಗಿದೆ. ಪೊಲೀಸರು ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಲಾಲ್ ರವಿಯನ್ನು ಬಂಧಿಸಿದ್ದಾರೆ.