ದಲಿತ ಸಿಎಂ ಚರ್ಚೆಗೆ ಸೆಡ್ಡು ಹೊಡೆಯಲು ಸಿದ್ದರಾಮಯ್ಯ ತಂತ್ರ!

Share

ಬೆಂಗಳೂರು, ಜೂನ 29: ಕಾಂಗ್ರೆಸ್‌ನಲ್ಲಿ ಭವಿಷ್ಯದ ಸಿಎಂ ಯಾರು ಎಂಬ ಚರ್ಚೆಯ ಜೊತೆಗೆ ದಲಿತ ಸಿಎಂ ವಿಚಾರ ಕಾವು ಏರುತ್ತಿದೆ. ಈ ಚರ್ಚೆಗೆ ಸೆಡ್ಡು ಹೊಡೆಯಲು ಸಿದ್ದರಾಮಯ್ಯ ರಾಜ್ಯಾದ್ಯಂತ ಪರಿಶಿಷ್ಟರ ಸಮಾವೇಶವನ್ನು ನಡೆಸುವ ತಂತ್ರ ರೂಪಿಸುತ್ತಿದ್ದಾರಂತೆ.

ಈ ಹಿಂದೆಯೂ ಅಹಿಂದ ಸಮಾವೇಶವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲು ಸಿದ್ದರಾಮಯ್ಯ ಯೋಜನೆ ರೂಪಿಸಿದ್ದರು. ಆದರೆ ಇದಕ್ಕೆ ಪಕ್ಷದೊಳಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈ ಬಿಟ್ಟಿದ್ದರು.

ಸಿಎಂ ಯಾರು ಎಂಬ ಚರ್ಚೆಯ ಜೊತೆಗೆ ದಲಿತರಿಗೆ ಸಿಎಂ ಪಟ್ಟ ನೀಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಪರಿಶಿಷ್ಟರ ಸಮಾವೇಶವನ್ನು ನಡೆಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ  ಎನ್ನಲಾಗಿದೆ.

ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಚರ್ಚೆಗಳ ಬೆನ್ನಲ್ಲೆ ಮಾಜಿ ಸಂಸದ ಕೆ.ಎಚ್‌ ಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ ಹಾಗೂ ಜಿ ಪರಮೇಶ್ವರ್ ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅಲ್ಲದೆ ಕೆ. ಎಚ್‌ ಮುನಿಯಪ್ಪ ಹಾಗೂ ಹರಿಪ್ರಸಾದ್ ದೆಹಲಿಗೂ ತೆರಳಿದ್ದಾರೆ. ಈ ಕಾರಣದಿಂದಾಗಿ ಈ ಚರ್ಚೆ ಇದೀಗ ಕೇಂದ್ರದಲ್ಲಿದೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುವುದು ಸದ್ಯದ ಕುತೂಹಲ.