‘ಕಿಸಾನ್ ರೈಲ್ಗೆ’ ಸಿಎಂ ಹಸಿರು ನಿಶಾನೆ
ಬೆಂಗಳೂರು,ಜೂನ 29: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿರುವ ‘ಕಿಸಾನ್ ರೈಲು ಯೋಜನೆ’ಗೆ ರಾಜ್ಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದ್ದಾರೆ.
ಯಲಹಂಕದ ರೈಲ್ವೆ ಸ್ಟೇಷನ್ನಲ್ಲಿ ಕಿಸಾನ್ ರೈಲು ಯೋಜನೆಗೆ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಚಾಲನೆ ನೀಡಿದರು. ಕೃಷಿ ಉತ್ಪನ್ನಗಳನ್ನ ಸುಗಮವಾಗಿ ಸಾಗಾಣಿಕೆ ಮಾಡಲು ಈ ರೈಲು ಯೋಜನೆ ಸಹಕಾರಿಯಾಗಲಿದೆ.
ಅನ್ನದಾತ ರೈತರು ಬೆಳೆದ ಬೆಳೆಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ ‘ಕಿಸಾನ್ ರೈಲು’ ಮಹತ್ವದ ಪಾತ್ರ ವಹಿಸುತ್ತಿದ್ದು, ನಮ್ಮ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರುತ್ತೇನೆ ಎಂದರು.