ರಾಜೀನಾಮೆ ಕೊಡೊದು ನಿಜ, ಅದರಲ್ಲಿ ಎರಡು ಮಾತಿಲ್ಲ-ರಮೇಶ್​ ಜಾರಕಿಹೊಳಿ

Share

ಮೈಸೂರು, ಜೂನ 25: ನಾನು ರಾಜೀನಾಮೆ ಕೊಡೊದು ನಿಜ, ಅದರಲ್ಲಿ ಎರಡು ಮಾತಿಲ್ಲ. ನಾ ರಾಜೀನಾಮೆ ನೀಡೋ ವಿಚಾರ ಹೇಗೆ ಹೊರಗಡೆ ಹೋಯ್ತೋ ಗೊತ್ತಿಲ್ಲ, ನನ್ನ ಆಪ್ತರ ಮುಂದೆ ಈ ವಿಚಾರ ಹೇಳಿಕೊಂಡಿದ್ದೆ ಎಂದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತೇ ರಾಜೀನಾಮೆ ಇಲ್ಲ, ನಮ್ಮ ಹಿತೈಷಿಗಳು ಕೆಲವರು ಏನೋ ಮಾತಾಡಿದ್ರು ಅದಕ್ಕೆ ಇನ್ನೊಂದು ಎಂಟು ದಿನ ಟೈಂ ತೆಗೆದುಕೊಂಡಿದ್ದೇನೆ. ಇನ್ನು ನಮ್ಮ ಪಕ್ಷ, ಆರ್.ಎಸ್.ಎಸ್ ನಾಯಕರು, ದೆಹಲಿ ನಾಯಕರು ನನ್ನನ್ನು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ಬ್ರದರ್ಸ್ ಇದ್ದಾರೆ, ಮಕ್ಕಳು ಇದಾರೆ. ಇನ್ನೂ ಬಹಳಷ್ಟು ಹುಲಿಗಳು ಇವೆ.

ವಿರೋಧಿಗಳು ರಮೇಶ ಜಾರಕಿಹೊಳಿಯವರನ್ನ ಮೂಲೆಗುಂಪು ಮಾಡಿದ್ವಿ ಎಂದು ತಿಳಿದಿರಬೇಕು. ಅದರ 10 ಪಟ್ಟು ಹುಲಿಗಳು ನಮ್ಮಲ್ಲಿದ್ದಾರೆ ಎಂದರು. ಇನ್ನು ಮಂತ್ರಿಗಾಗಿ ಲಾಭಿ ಮಾಡುವಷ್ಟು ಸಣ್ಣ ಮನುಷ್ಯ ನಾನಲ್ಲ. ಬೇರೆಯವರನ್ನ ಮಂತ್ರಿ ಮಾಡುವಷ್ಟು ಶಕ್ತಿ ನನಗಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು‌ ಬದ್ದ. ಯಾರಿಂದ ನನಗೆ ನೋವಾಗಿದೆ, ಅವರನ್ನ ಮನೆಗೆ ಕಳಿಸದೇ ಬಿಡೋದಿಲ್ಲ. ನಾಟಕ ಮಾಡುವ ವ್ಯಕ್ತಿ ನಾನಲ್ಲ ಎಂದು ರಮೇಶ ಜಾರಕಿಹೊಳಿಯವರು