ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ಕ್ಕೆ ಉಪಚುನಾವಣೆ ಘೋಷಣೆ
ನವದೆಹಲಿ: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ ಬೆನ್ನಲ್ಲೇ ಕರ್ನಾಟಕದ 15 ಅನರ್ಹ ಶಾಸಕರ ಕ್ಷೇತ್ರಗಳಿಗೂ ಉಪಚುನಾವಣೆಯ ದಿನಾಂಕ ಘೋಷಿಸಿದೆ.
ಒಟ್ಟು 17 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿತ್ತು. ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ನ್ಯಾಯಾಲಯ ತಡೆ ನೀಡಿರುವುದರಿಂದ ಉಳಿದ 15 ಕ್ಷೇತ್ರಗಳಿಗೆಚುನಾವಣೆ ನಡೆಯಲಿದೆ.
ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು ಅ.24ಕ್ಕೆ ಫಲಿತಾಂಶ ಹೊರ ಬರಲಿದೆ. ಉಪಚುನಾವಣೆ ದಿನಾಂಕ ಪ್ರಕಟವಾಗಿರುವುದರಿಂದ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.
ಉಪಚುಣಾವಣೆ ಅಧಿಸೂಚನೆಯ ಪ್ರಕಟಣೆ: ದಿನಾಂಕ: 23–09–2019
ನಾಮಪತ್ರ ಸಲ್ಲಿಸಲು ಕಡೆ ದಿನಾಂಕ: 30–09–2019
ನಾಮಪತ್ರ ಹಿಂಪಡೆಯಲು ಕಡೆಯ ದಿನಾಂಕ: 03–10–2019
ಮತದಾನ ದಿನಾಂಕ: 21–10–2019
ಫಲಿತಾಂಶ ದಿನಾಂಕ: 24–10–2019
ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು:
1)ಗೋಕಾಕ್
2)ಅಥಣಿ
3)ಕಾಗವಾಡ
4)ಹಿರೆಕೆರೂರು
5)ಯಲ್ಲಾಪುರ
6)ಯಶವಂತಪುರ್
7)ವಿಜಯನಗರ
8)ಶಿವಾಜಿನಗರ
9)ಹೊಸಕೋಟೆ
10)ಹುಣಸೂರು
11)ಕೆಆರ್ ಪೇಟೆ
12)ಮಹಾಲಕ್ಷ್ಮಿ ಲೇಔಟ್
13)ಕೆಆರ್ ಪುರ
14)ರಾಣೇಬೆನ್ನೂರು
15)ಚಿಕ್ಕಬಳ್ಳಾಪುರ