ಮುಸ್ಲಿಂ ವ್ಯಾಪಾರಿಗಳ ಅನುಪಸ್ಥಿತಿಯಲ್ಲಿ ಕಾಪು ಜಾತ್ರೆ ಮುಕ್ತಾಯ

Share

ಉಡುಪಿ, ಮಾರ್ಚ್ 23: ಪ್ರಸಿದ್ಧ ಕಾಪು ಮಾರಿಗುಡಿ ಜಾತ್ರೆಯು ಮೊದಲ ಬಾರಿಗೆ ಮುಸ್ಲಿಂ ವ್ಯಾಪಾರಿಗಳ ಅನುಪಸ್ಥಿತಿಯಲ್ಲಿ ಬುಧವಾರ ಮುಕ್ತಾಯವಾಯಿತು.

ವ್ಯಾಪಾರ ಮಾಡಲು ಅನುಮತಿ ನೀಡುವಂತೆ ಜಾತ್ರೆ ಆರಂಭವಾಗುವ ಕೊನೆಯ ಕ್ಷಣದವರೆಗೂ ಮುಸ್ಲಿಂ ವ್ಯಾಪಾರಿಗಳು ಮಾಡಿದ ಮನವಿಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಒಪ್ಪಿಗೆ ಸಿಗಲಿಲ್ಲ. ಪರಿಣಾಮ ಮುಸ್ಲಿಂ ವ್ಯಾಪಾರಿಗಳು ಜಾತ್ರೆಯಿಂದ ಹೊರಗುಳಿಯಬೇಕಾಯಿತು.

ದೇವಸ್ಥಾನದ ಆವರಣದಲ್ಲಿ ಮುಸ್ಲಿಮರ ಬದಲಾಗಿ ಹಿಂದೂ ವ್ಯಾಪಾರಿಗಳೇ ಕೋಳಿ ಮಾರಾಟ ಮಳಿಗೆ, ಹೂ ಹಣ್ಣು, ಐಸ್‌ಕ್ರೀಂ, ಜ್ಯೂಸ್‌ ಕೇಂದ್ರಗಳನ್ನು ತೆರೆದಿದ್ದರು. ಎಲ್ಲ ಮಳಿಗೆಗಳಿಗೂ ಕೇಸರಿ ಧ್ವಜಗಳನ್ನು ಹಾಕಲಾಗಿತ್ತು.