ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ಪಾವತಿ ವಿಳಂಬಕ್ಕೆ ಕಾರಣ ಕೇಳಿ ಹಾವೇರಿ ತಹಶೀಲ್ದಾರಗೆ ನೋಟೀಸ್

Share

ಹಾವೇರಿ: ಅತಿವೃಷ್ಠಿ ಹಾಗೂ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ವಿತರಣೆಯಲ್ಲಿ ನಿರ್ಲಕ್ಷ್ಯ ಹಾಗೂ ಪರಿಹಾರ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದರಿಂದ ಶಿಸ್ತು ಕ್ರಮ ತೆಗೆದುಕೊಳ್ಳುವ  ಕುರಿತಂತೆ  ಹಾವೇರಿ ತಹಶೀಲ್ದಾರ ಅವರಿಗೆ ಕಾರಣ ಕೇಳಿ  ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು  ನೋಟೀಸ್ ಜಾರಿಮಾಡಿದ್ದಾರೆ.


ಸರ್ಕಾರದ ಆದೇಶದನ್ವಯ ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಅತಿವೃಷ್ಠಿ ಹಾಗೂ ನೆರೆ ಸಂತ್ರಸ್ತರಿಗೆ ತತಕ್ಷಣ 10 ಸಾವಿರ ರೂ. ಪರಿಹಾರ ನೀಡಲು ಸೂಚಿಸಿದ್ದರೂ ಸಂತ್ರಸ್ತರಿಗೆ ಹಣ ಪಾವತಿಸಿದೇ ಇರುವುದು, ಅಲ್ಲದೇ ಹಣ ಪಾವತಿ ಮಾಡಿರುವುದಾಗಿ ಜಿಲ್ಲಾಡಳಿತಕ್ಕೆ ತಪ್ಪು ಮಾಹಿತಿ ನೀಡಿರುವುದು ನೆರೆ ಸಂದರ್ಭದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ವಿಫಲವಾಗಿರುವ ಕುರಿತಂತೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.