ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಕುಮಾರಸ್ವಾಮಿ

Share

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 10 ದಿನಗಳ ನಂತರ ಹೆಚ್ ನಾಗೇಶ್ ಹಾಗೂ ಆರ್ ಶಂಕರ್ ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ಖಾತೆ ಹಂಚಿಕೆ ಮಾಡಿದ್ದಾರೆ.
ಸಿಎಂ ಗ್ರಾಮ ವಾಸ್ತವ್ಯವಿದ್ದಿರಿಂದ ಸಚಿವರಿಗೆ ಖಾತೆ ಹಂಚಿಕೆ ಮುಂದೂಡಲ್ಪಟ್ಟಿತ್ತು. ಆರ್ ಶಂಕರ್ ಅವರಿಗೆ ಪೌರಾಡಳಿತ ಖಾತೆ, ಸಣ್ಣ ಕೈಗಾರಿಕೆ ಖಾತೆಯನ್ನು ಹೆಚ್ ನಾಗೇಶ ಹಾಗೂ ಗುಬ್ಬಿ ಶ್ರೀನಿವಾಸಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆಯನ್ನು ಹಂಚಿಕೆ ಮಾಡಿದ್ದಾರೆ.
ಇದಕ್ಕೂ ಮುನ್ನ ಸಿ.ಎಸ್ ಶಿವಳ್ಳಿಯವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಪೌರಾಡಳಿತ ಖಾತೆ ವಹಿಸಿದ್ದ ರಮೇಶ್ ಜಾರಕಿಹೊಳಿಯವರಿಂದ ತೆಗೆದು ನೀಡಲಾಗಿತ್ತು. ಶಿವಳ್ಳಿಯವರ ನಿಧನದಿಂದ ಖಾತೆ ಖಾಲಿ ಉಳಿದಿತ್ತು. ಅದನ್ನು ಇದೀಗ ಆರ್ ಶಂಕರ್ ಗೆ ನೀಡಲಾಗಿದೆ.