ನಾವು ಕಾಲೇಜು ಹುಡುಗರಲ್ಲ, ಅನರ್ಹತೆಗೆ ಹೆದರಲ್ಲ

Share

ಬೆಂಗಳೂರು: ನಾವು ಕಾಲೇಜು ಹುಡುಗರಲ್ಲ, ಅನರ್ಹತೆಗೆ ಅತೃಪ್ತರು ಯಾವುದೇ ಕಾರಣಕ್ಕೂ ಹೆದರಲ್ಲ. ಶಾಸಕರ ಅನರ್ಹತೆ ವಿಚಾರನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತವೆ ಎಂದು ಹುಣಸೂರು ಶಾಸಕ ಹಾಗೂ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹೇಳಿದರು.

ದೋಸ್ತಿ ಸರಕಾರದ ವಿರುದ್ಧ ಬಂಡಾಯ ಸಾರಿದ್ದ ಅತೃಪ್ತ ಶಾಸಕರ ಪೈಕಿ ಮೂವರನ್ನು ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಅನರ್ಹಗೊಳಿಸಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಖಾಸಗಿ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿ ಅವರು ಮಾತನಾಡಿದರು.

ನಾವೆಲ್ಲ ಸಾಕಷ್ಟು ಅನುಭವಿಗಳಾಗಿದ್ದು, ರಾಜಕೀಯದಲ್ಲಿ ಇಂತಹ ಸಾಕಷ್ಟು ಪ್ರಕರಣಗಳನ್ನು ಕಂಡಿದ್ದೇವೆ. ಎರಡರಿಂದ ಮೂರು ದಿನಗಳಲ್ಲಿ ‌ನಾವು ಬೆಂಗಳೂರಿಗೆ ಆಗಮಿಸಲಿದ್ದು, ಅನರ್ಹತೆ ವಿಚಾರನ್ನು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡುತ್ತವೆ. ಸದ್ಯಕ್ಕೆ ನಾವೆಲ್ಲ ಒಟ್ಟಾಗಿದ್ದು, ಎಲ್ಲವನ್ನೂ ಎದುರಿಸಲು ಸಿದ್ಧರಾಗಿದ್ದೇವೆ ಎಂದರು.