ವಿದ್ಯಾವಾಚಸ್ಪತಿ ಪದ್ಮಶ್ರೀ ಪುರಸ್ಕೃತ ಡಾ. ಗೊವಿಂದಾಚಾರ್ಯ ವಿಧಿವಶ

Share

ಉಡುಪಿ: ಭಾರತೀಯ ವೇದ ಮತ್ತು ಸಂಸ್ಕೃತಿಯ ರಾಯಭಾರಿಯಾಗಿದ್ದ, ವಿದ್ಯಾ ವಾಚಸ್ಪತಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಬನ್ನಂಜೆ ಗೋಂವಿದಾಚಾರ್ಯ ಅವರುು ಇಂದು (ಭಾನುವಾರ) ಉಡುಪಿ ಜಿಲ್ಲೆಯ ಅಂಬಲಪಾಡಿಯ ತಮ್ಮ ನಿವಾಸದಲ್ಲಿ ನಿಧನರಾದರು.

ಮಾಧ್ವ ತತ್ವವನ್ನು, ಸಂಸ್ಕೃತದ ಅನೇಕ ಕೃತಿಗಳನ್ನು, ಶ್ಲೋಕ, ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸಿದ್ದ
ಶ್ರೀಯುತರಿಗೆ 84 ವಯಸ್ಸಾಗಿತ್ತು. ವಯೋಸಹಜ ಕಾರಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಪ್ರವಚನಕಾರ ಹಾಗೂ ಮಧ್ವ ಸಿದ್ದಾಂತದ ಪ್ರತಿಪಾದಕರಾಗಿದ್ದರು. ನಟ, ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮಿಕ ಗುರುವಾಗಿದ್ದರು.