ಮರಾಠ ಸಮುದಾಯ ಬಡವರ ಸಮಾಜ, ಅಭಿವೃದ್ದಿಗೆ 50 ಕೋಟಿ ಸಾಕಾಗುವುದಿಲ್ಲ: ಶಾಸಕಿ ಅಂಜಲಿ ನಿಂಬಾಳ್ಕರ್

Share

ಧಾರವಾಡ: ಮುಖ್ಯಮಂತ್ರಿಗಳು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ, ಅದಕ್ಕೆ ಐವತ್ತು ಕೋಟಿ ರೂಪಾಯಿ ನೀಡಿರುವುದಾಗಿ ಹೇಳುತ್ತಿದ್ದಾರೆ. ಆದರೆ ಕೇವಲ ಐವತ್ತು ಕೋಟಿಯಿಂದ ಏನೂ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂದು ಶಾಸಕಿ ಅಂಜಲಿ‌ ನಿಂಬಾಳ್ಕರ್ ಪ್ರಶ್ನೆ ಮಾಡಿದ್ದಾರೆ.

ಧಾರವಾಡದಲ್ಲಿ ನಡೆದ ಕ್ರಾಂತಿ ಮೋರ್ಚಾ ಮರಾಠದ, ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ, ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮರಾಠ ಸಮಾಜ ಬಡವರಿಂದ ಕುಡಿದ ಸಮಾಜವಾಗಿದೆ. ಈಗ ಮುಖ್ಯಂಮತ್ರಿಗಳು ಮರಾಠ ಅಭಿವೃದ್ಧಿ ಪ್ರಧಿಕಾರಕ್ಕೆ ಕೇವಲ ಐವತ್ತು ಕೋಟಿ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ನಾವು ನಾಲ್ಕರಿಂದ ಐದು ಪರ್ಸೆಂಟ್ ಜನ ಇದ್ದೇವೆ, ಹಾಗಾಗಿ ಕೇವಲ ಐವತ್ತು ಕೋಟಿ‌ ಇಂದ ಏನು ಮಾಡಲು ಸಾಧ್ಯವಿದೆ ಎಂದರು.

ಇವತ್ತು ನಡೆದ ಕಾರ್ಯಕಾರಣಿ ಸಭೆಯಲ್ಲಿ ಸಮಾಜದ ಮುಖಂಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ ಅವರು, ಜಾತಿಯ ಮೇಲೆ ಪ್ರಾಧಿಕಾರಗಳನ್ನು ಸ್ಥಾಪನೆ ಮಾಡುತ್ತಾ ಜಾತಿಯ ಮೇಲೆ ಚುನಾವಣೆ ಮಾಡುವುದು ಎಷ್ಟರಮಟ್ಟಿಗೆ ಒಳ್ಳೆಯದು ಎಂದು ವಿಚಾರ ಮಾಡಬೇಕು. ಅಲ್ಲದೆ ಚುನಾವಣೆಗಳು ಜಾತಿ ಮೀರಿ ನಡೆಯಬೇಕು, ಜಾತಿ ಆಧಾರದ ಮೇಲೆ ನಡೆಯಬಾರದು ಎಂದು ಹೇಳಿದ್ದರು.

ಮರಾಠ ಸಮಾಜ ಅಭಿವೃದ್ಧಿ ಕಾಣಬೇಕಾದ್ರೆ ಅದೂ 2ಎ ಮೀಸಲಾತಿಯಿಂದಾನೇ ಮಾತ್ರ ಸಾಧ್ಯವಾಗುತ್ತದೆ. ಅಲ್ಲದೆ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಇನ್ನೂ ಐವತ್ತು ಕೋಟಿ ಹಣ ಕೊಡುವುದಾಗಿ ಹೇಳಿದ್ದಾರೆ. ಹಾಗಾಗಿ ಇದು ಒಂದು ಚುನಾವಣೆ ಗಿಮಿಕ್ ಎಂದು ನಾವು ಹೇಳಿದ್ದೇವು. ಮುಖ್ಯಮಂತ್ರಿಗಳು ಸಾಕಷ್ಟು ಭರವಸೆಗಳನ್ನು ನಾವು ನೋಡಿದ್ದೇವೆ. ಫ್ಲಡ್ ಬಂದು ಕಳೆದ ವರ್ಷ ಮನೆಗಳು ಬಿದ್ದು ಹೋಗಿವೆ ಖಾನಾಪುರ ಕ್ಷೇತ್ರದಲ್ಲಿ ಇದೂವರೆಗೂ ಒಂದು ನೈಯಾ ಪೈಸಾ ಹಣ ಬೀಡುಗಡೆ ಆಗಿಲ್ಲವೆಂದು ವಾಗ್ದಾಳಿ ನಡೆಸಿದರು.